Gandhakuti

‘ಬಾಗ್ ಬಹುದುರ್ ನ ಸಾವು’ ಲೇಖಕ ಬಂಜಗೆರೆ ಜಯಪ್ರಕಾಶ್ ಅವರ ಲೇಖನ ಸಂಕಲನ. ಕಳೆದ ಎರಡು ಮೂರು ವರ್ಷಗಳಲ್ಲಿ ಬರೆದ ಕೆಲವು ಲೇಖನಗಳು ಇಲ್ಲಿ ಸಂಕಲನಗೊಂಡಿವೆ. ನಮ್ಮ ಸಮಕಾಲೀನ ದೃಷ್ಟಿಕೋನ ಹಾಗೂ ಸೂಕ್ಷ್ಮ ಗ್ರಹಿಕೆಗಳಿಂದ ಕೂಡಿವೆ. ಬಹುಪಾಲು ಲೇಖನಗಳು ಪ್ರಖರ ಬೌದ್ಧಿಕತೆಯ ನಡುವೆಯೂ ವೈಯಕ್ತಿಕ ಅನುಭವಗಳ ನೆಲೆಯಲ್ಲಿ ಕಥನಗಳಂತೆ ಚೇತೋಹಾರಿಯಾಗಿ ನಿರೂಪಿತವಾಗಿರುವುದೊಂದು ವೈಶಿಷ್ಟ, ಕನ್ನಡದ ಸಂಸ್ಕೃತಿ ಚಿಂತನೆಗೆ ಈ ಸಂಕಲನವೊಂದು ಮೌಲಿಕ ಸೇರ್ಪಡೆ.