Gandhakuti

ಸಂಸ್ಕೃತಿ ಅಧ್ಯಯನ – ತಾತ್ವಿಕ ನೆಲೆ ಮತ್ತು ಸಿದ್ಧತೆಗಳು

1. ಸೈದ್ಧಾಂತಿಕ ನಿಲುವು : ಯಾವುದೇ ಸಂಶೋಧನೆ/ ಅಧ್ಯಯನಸಾಮಾನ್ಯವಾಗಿ ಸಂಗತಿ ಅಥವಾ ವಿಷಯವೊಂದರ ಹುಡುಕಾಟವಾಗಿರುತ್ತದೆ. ಅದಕ್ಕಾಗಿ ಹುಡುಕುವುದು, ಸಿಕ್ಕುವ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಹಾಗೆ ಸಿಕ್ಕ ಮಾಹಿತಿಯನ್ನು ಅರ್ಥೈಸುವುದು ಎಂಬ ಸಾಮಾನ್ಯ ಪದ್ಧತಿಯನ್ನು ಎಲ್ಲರೂ ಬಳಸುತ್ತಾರೆ.ಅಧ್ಯಯನಕಾರನಿಗಿರುವ ಬೌದ್ಧಿಕ ಕುತೂಹಲ ಮತ್ತು ಆಸಕ್ತಿಗಳೇ ಈ ಬಗೆಯ ಹೊಸ ವಿಷಯಗಳ ಹುಡುಕಾಟದ ಮೂಲ. ಕೆಲವು ಸಂದರ್ಭಗಳಲ್ಲಿ ಆಸಕ್ತಿ ಎಂಬುದು ವಿವಿಧ ಬಗೆಯ ಹಿತಾಸಕ್ತಿಯೂ ಆಗಿರಬಹುದು. ಈ ಹಿತಾಸಕ್ತಿ ಎನ್ನುವುದಕ್ಕೆ ಇರುವ ಮುಖಗಳು ನೂರಾರು. ಸಾಮಾಜಿಕ ಸನ್ನಿವೇಶವೊಂದರಲ್ಲಿ ಜೀವಿಸುವ ಅಧ್ಯಯನಕಾರ ನಿರ್ದಿಷ್ಟ […]

ಪ್ರತ್ಯೇಕ ರಾಜ್ಯ: ವಾಸ್ತವ ಮತ್ತು ಅವಾಸ್ತವಗಳು

ಕಳೆದ 25-30 ವರ್ಷಗಳಿಂದ ಹೈದರಾಬಾದ್ ಕರ್ನಾಟಕದ ಕೆಲವು ಭಾಗಗಳಲ್ಲಿ ಕೆಲವು ರಾಜಕೀಯ ಮುಖಂಡರು ಹಾಗೂ ಸಂಘ ಸಂಸ್ಥೆಗಳು ಈ ಬೇಡಿಕೆಯನ್ನು ಆಗಾಗ ಎತ್ತುತ್ತಿದ್ದುದು ಜನರ ಗಮನದಲ್ಲಿದೆ. ಹಿರಿಯ ಮುಖಂಡರಾದ ವೈಜನಾಥ ಪಾಟೀಲರ ನೇತೃತ್ವದಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ವೇದಿಕೆ ಎನ್ನುವ ವೇದಿಕೆಯು ಆ ಸಮಯದಲ್ಲಿ ಕ್ರಿಯಾಶೀಲವಾಗಿತ್ತು. ಕಡೆಗೊಮ್ಮೆ ವೈಜನಾಥ ಪಾಟೀಲರು ತಮ್ಮ ಪ್ರಾಂತದ ಅಭಿವೃದ್ಧಿಯ ಬೇಡಿಕೆಗಳು ಈಡೇರಿಸಲ್ಪಡುತ್ತಿಲ್ಲವೆಂಬ ಬೇಸರದಲ್ಲಿ, ಕನ್ನಡ ರಾಜ್ಯೋತ್ಸವದಂದೇ ಪ್ರತ್ಯೇಕ ಹೈದರಾಬಾದ್ ಕರ್ನಾಟಕ ರಾಜ್ಯದ ಭಾವುಟವನ್ನು ಹಾರಿಸಿ ರಾಜ್ಯೋತ್ಸವವನ್ನು ವಿರೋಧಿಸಿದ್ದರು. ಆಗ ಸಾಕಷ್ಟು ವಿವಾದ […]

ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ಚಿರಂತನ ಸತ್ಯಾಗ್ರಹಿಗೆ ನಮನ: ಬಂಜಗೆರೆ ಜಯಪ್ರಕಾಶ್

ಗಾಂಧಿವಾದವು ಗಾಂಧಿಯ ನಂತರ ತಳೆದಿರುವ ಹಲವು ರೂಪಾಂತರಗಳಲ್ಲಿ ತೋರಿಕೆಯ ಗಾಂಧಿವಾದವೂ ಒಂದು. ಅಸ್ತಿತ್ವದಲ್ಲಿರುವ ಕೆಲವನ್ನು ಸ್ಥೂಲವಾಗಿ ಎಡಗಾಂಧಿವಾದ ಬಲಗಾಂಧಿವಾದ ಎಂದು ವಿಂಗಡಿಸಬಹುದು ಎಂದು ನಾನು ಅಂದುಕೊಳ್ಳುತ್ತೇನೆ. ಈ ಎಡ ಬಲಕ್ಕೆ ಉದಾಹರಣೆಯಾಗಿ ನಾನು ಇಬ್ಬರು ವ್ಯಕ್ತಿಗಳನ್ನು ಸೂಚಿಸಬಯಸುತ್ತೇನೆ. ಒಬ್ಬರು ರಾಜ್ಯಮಟ್ಟದಲ್ಲಿ ಹೆಚ್ಚು ಸಕ್ರಿಯವಾಗಿದ್ದ ಎಚ್ ಎಸ್ ದೊರೆಸ್ವಾಮಿಯವರು. ಮತ್ತೊಬ್ಬರು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುವ ಅಣ್ಣಾ ಹಜಾರೆಯವರು. ಎಡಗಾಂಧಿವಾದಕ್ಕೆ ಎಚ್ ಎಸ್ ದೊರೆಸ್ವಾಮಿಯವರು ಅಪ್ಪಟ ಉದಾಹರಣೆಯಾದರೆ ಬಲಗಾಂಧಿವಾದಕ್ಕೆ ಅಣ್ಣಾ ಹಜಾರೆ ಅಪ್ರತಿಮ ಉದಾಹರಣೆ. ಇವರಿಬ್ಬರ ಕಾರ್ಯಾಚರಣೆಯ ವಿಧಾನದಲ್ಲಿ ಕೂಡ […]

ಚರ್ಚೆ | ಭಾಗವತರ ಡಿಎನ್‍ಎ ಇತಿಹಾಸ ಮತ್ತು ಐತಿಹ್ಯ

ಸಂಘ ಪರಿವಾರದ ಅಂಗಸಂಸ್ಥೆಯೇ ಆಗಿರುವ ‘ಮುಸ್ಲಿಂ ರಾಷ್ಟ್ರೀಯ ಮಂಚ್’ನ ಕಾರ್ಯಕ್ರಮದಲ್ಲಿ ಮುಸ್ಲಿಮರಿಗೆ ಸಿಹಿ ಅನಿಸುವಂತಹ ಮಾತನ್ನಾಡುವಾಗಲೂ ಮೋಹನ ಭಾಗವತರು ಮುಸ್ಲಿಮರ ‘ಹಿಂದೂಕರಣ’ದ ಅಜೆಂಡಾವನ್ನೇ ಗುಪ್ತವಾಗಿ ನುಡಿಯುತ್ತಿದ್ದಾರೆನಿಸುತ್ತದೆ. ಮೋಹನ ಭಾಗವತ್‌ ಅವರ ಮಾತಿಗೆ ವಿಶೇಷ ಮಹತ್ವ ಬಂದಿರುವುದು ವಿನಾಕಾರಣವೇನಲ್ಲ. ಎರಡು ದಶಕಗಳಿಂದ ಸಂಘ ಪರಿವಾರದ ಪಾತ್ರ ವಿಶೇಷವಾಗಿ ವ್ಯಾಪಿಸಿದೆ, ಬಲಗೊಂಡಿದೆ. ಹಾಗಾಗಿ ಅವರು ಏನನ್ನಾದರೂ ಹೇಳಿದರೆ ಆ ಬಗ್ಗೆ ಗಮನ ನೀಡುವುದು ಬಹಳ ಅಗತ್ಯ. ಈಚೆಗೆ ಅವರು ಡಿಎನ್‍ಎ ಬಗ್ಗೆ ಮಾತನಾಡಿರುವುದು ಸದ್ದು ಮಾಡುತ್ತಿದೆ. ಭಾಗವತರ ಮಾತು ಕೋಮುಸೌಹಾರ್ದತೆಯನ್ನು […]