ನಮ್ಮ ಮನೆಯಲ್ಲಿರುವ ಹಲವಾರು ಬುದ್ಧ ಪ್ರತಿಮೆಗಳನ್ನು ನೋಡಿದಾಗಲೆಲ್ಲಾ ಇಷ್ಟು ಮಾಟವಾದ ಬುದ್ಧನನ್ನು ಪರಿಕಲ್ಪನೆ ಮಾಡಿದ ಮೊದಲ ಕಲಾವಿದ, ಶಿಲ್ಪಿ ಯಾರಿರಬಹುದು ಎಂಬ ಪ್ರಶ್ನೆ ಹುಟ್ಟುತ್ತದೆ ನನಗೆ. ಗಾಂಧಾರ ಶೈಲಿಯ ಬುದ್ಧ ನನಗೆ ಹೆಚ್ಚು ಇಷ್ಟವಾಗುವ ಪ್ರತಿಮೆ. ಭೂತಾನ್ ಶೈಲಿ, ಜಪಾನ್ ಶೈಲಿ, ಟಿಬೆಟ್ ಶೈಲಿಯ ಬುದ್ಧರು ನನಗ್ಯಾಕೋ ಮನಸ್ಸಿಗಿಳಿಯುವುದಿಲ್ಲ. ಇಂಡಿಡ್ ತಳಿಯ ಮುಖಲಕ್ಷಣಗಳು ನನಗೆ ಹೆಚ್ಚು…
(ಕವಿ ಸಿದ್ಧಲಿಂಗಯ್ಯನವರು ನಿಧನರಾದಾಗ ಬರೆದ ಬರೆಹ) ನಾವು ಈ ಕರೊನಾ ಕಾಲಘಟ್ಟದಲ್ಲಿ ಬಹಳ ಮಹತ್ವದ ಹಲವು ವ್ಯಕ್ತಿಗಳನ್ನು ಕಳೆದುಕೊಂಡಿದ್ದೇವೆ. ಅದರಲ್ಲೂ ನಮ್ಮ ಹೋರಾಟಕ್ಕೆ, ಸಾಮಾಜಿಕ ಚಿಂತನೆಗಳಿಗೆ, ನಮ್ಮ ಆಶಯಗಳಿಗೆ ಬಹಳ ನಿಕಟವಾಗಿದ್ದ ಇಬ್ಬರು ವ್ಯಕ್ತಿಗಳನ್ನು ಇತ್ತೀಚಿಗೆ ಕಳೆದುಕೊಂಡಿದ್ದೇವೆ. ಇವರಲ್ಲಿ ಒಬ್ಬರು ಎಚ್. ಎಸ್. ದೊರೆಸ್ವಾಮಿಯವರು. ಇವರು ಗಾಂಧಿವಾದಿಯಾಗಿದ್ದಾಗಲೂ ಸಹ ಅದರ ಮಡಿವಂತಿಕೆಯನ್ನು ಇಟ್ಟುಕೊಳ್ಳದೆ ಎಲ್ಲಾ ಎಡಪಂಥೀಯ…
[‘ಎದೆಗೆ ಬಿದ್ದ ಅಕ್ಷರ’ ಕುರಿತು ಮಾತನಾಡಿದ ಸಂದರ್ಭ… ] ಭೈರಪ್ಪ ಒಬ್ಬ ಕಾದಂಬರಿಕಾರರಾಗಿ ಸಾಹಿತ್ಯದಲ್ಲಿ ಇರಬೇಕಾದ ನ್ಯಾಯಪ್ರಜ್ಞೆಯನ್ನು ಇಟ್ಟುಕೊಳ್ಳದೆ ಅವಾಸ್ತವಿಕ ವಿಷಯಗಳನ್ನು ಸತ್ಯ ಅನ್ನುವ ರೀತಿಯಲ್ಲಿ ಜನರ ಮುಂದೆ ಬಿಂಬಿಸುವುದು ಮತ್ತು ಈಗಾಗಲೇ ಬಾಧೆಗೊಳಗಾಗಿರುವ ಜನರಿಗೆ ಬರೆ ಎಳೆಯುವುದಕ್ಕೆ ಪ್ರಯತ್ನ ಪಡುವುದು ಆತ್ಮಸಾಕ್ಷಿರಹಿತ ನಡೆ. ಇದಕ್ಕೆ ಪರ್ಯಾಯವಾಗಿ ನಮ್ಮ ಎದುರು ಕಾಣುವುದು ದೇವನೂರ ಮಹಾದೇವ. ಅವರ…
ಭಾರತವೂ ಸೇರಿದಂತೆ ತೃತೀಯ ಜಗತ್ತು ಎಂದು ಕರೆಸಿಕೊಳ್ಳುವ ದೇಶಭಾಷೆಗಳ ಲೇಖಕರು ಬರವಣಿಗೆ ಮಾಡುವಾಗ ಎದುರಿಸುವ ಸವಾಲುಗಳು ಅನೇಕ. ಅವುಗಳಲ್ಲಿ ಅವರಿರುವ ಕಾಲಘಟ್ಟದ ಸಾಮಾಜಿಕ ವಾಸ್ತವತೆ ಹಾಗೂ ರಾಜಕೀಯ ಪರಿಸ್ಥಿತಿ ಇವುಗಳನ್ನು ಒಳಗೊಳ್ಳದೆ ಸಾಹಿತ್ಯವನ್ನು ಬರೆಯುವುದು ಕಷ್ಟ. ಸಾಹಿತಿ ಅಂದರೆ ಸಮಾಜದಲ್ಲಿನ ಸಕ್ರಿಯ ಪ್ರಜ್ಞೆ ಎಂದಾಗುತ್ತದೆ. ಆ ಸಕ್ರಿಯ ಪ್ರಜ್ಞೆ ಇರುವ ಬರಹಗಾರ ತನ್ನೊಳಗಿನ ತೊಳಲಾಟಗಳನ್ನು ಬರಹದ…
ಲಕ್ಷ್ಮಣ ಕೌಂಟೆ ಅವರು ಬರೆದಿರುವ `ಧರೆಯ ತಂದವರು ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಒಂದು ವಿಚಾರ ಸಂಕಿರಣವನ್ನೂ ಮಾಡುವುದು ಬಹಳ ಮುಖ್ಯ ಅಂತ ನಾನು ಸೂಚಿಸಿದೆ. ಇದನ್ನು ನಾನು ಯಾಕೆ ಸೂಚಿಸಿದೆ ಅಂದರೆ ಈ ವಿಷಯಗಳ ಮೇಲೆ ವಿಶ್ವವಿದ್ಯಾಲಯದಂತಹ ಆವರಣಗಳಲ್ಲಿ ಚರ್ಚೆ ಆಗುವಂಥದ್ದು ಬಹಳ ಮುಖ್ಯ ಅಂತ ನನ್ನ ಭಾವನೆ. ಮಂಟೇಸ್ವಾಮಿ ಅಲಕ್ಷಿತ ವಲಯದಿಂದ ಬಂದಂತಹ ಒಬ್ಬ…
1. ಸೈದ್ಧಾಂತಿಕ ನಿಲುವು : ಯಾವುದೇ ಸಂಶೋಧನೆ/ ಅಧ್ಯಯನಸಾಮಾನ್ಯವಾಗಿ ಸಂಗತಿ ಅಥವಾ ವಿಷಯವೊಂದರ ಹುಡುಕಾಟವಾಗಿರುತ್ತದೆ. ಅದಕ್ಕಾಗಿ ಹುಡುಕುವುದು, ಸಿಕ್ಕುವ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಹಾಗೆ ಸಿಕ್ಕ ಮಾಹಿತಿಯನ್ನು ಅರ್ಥೈಸುವುದು ಎಂಬ ಸಾಮಾನ್ಯ ಪದ್ಧತಿಯನ್ನು ಎಲ್ಲರೂ ಬಳಸುತ್ತಾರೆ.ಅಧ್ಯಯನಕಾರನಿಗಿರುವ ಬೌದ್ಧಿಕ ಕುತೂಹಲ ಮತ್ತು ಆಸಕ್ತಿಗಳೇ ಈ ಬಗೆಯ ಹೊಸ ವಿಷಯಗಳ ಹುಡುಕಾಟದ ಮೂಲ. ಕೆಲವು ಸಂದರ್ಭಗಳಲ್ಲಿ ಆಸಕ್ತಿ ಎಂಬುದು…
ಕಳೆದ 25-30 ವರ್ಷಗಳಿಂದ ಹೈದರಾಬಾದ್ ಕರ್ನಾಟಕದ ಕೆಲವು ಭಾಗಗಳಲ್ಲಿ ಕೆಲವು ರಾಜಕೀಯ ಮುಖಂಡರು ಹಾಗೂ ಸಂಘ ಸಂಸ್ಥೆಗಳು ಈ ಬೇಡಿಕೆಯನ್ನು ಆಗಾಗ ಎತ್ತುತ್ತಿದ್ದುದು ಜನರ ಗಮನದಲ್ಲಿದೆ. ಹಿರಿಯ ಮುಖಂಡರಾದ ವೈಜನಾಥ ಪಾಟೀಲರ ನೇತೃತ್ವದಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ವೇದಿಕೆ ಎನ್ನುವ ವೇದಿಕೆಯು ಆ ಸಮಯದಲ್ಲಿ ಕ್ರಿಯಾಶೀಲವಾಗಿತ್ತು. ಕಡೆಗೊಮ್ಮೆ ವೈಜನಾಥ ಪಾಟೀಲರು ತಮ್ಮ ಪ್ರಾಂತದ ಅಭಿವೃದ್ಧಿಯ ಬೇಡಿಕೆಗಳು…
ಗಾಂಧಿವಾದವು ಗಾಂಧಿಯ ನಂತರ ತಳೆದಿರುವ ಹಲವು ರೂಪಾಂತರಗಳಲ್ಲಿ ತೋರಿಕೆಯ ಗಾಂಧಿವಾದವೂ ಒಂದು. ಅಸ್ತಿತ್ವದಲ್ಲಿರುವ ಕೆಲವನ್ನು ಸ್ಥೂಲವಾಗಿ ಎಡಗಾಂಧಿವಾದ ಬಲಗಾಂಧಿವಾದ ಎಂದು ವಿಂಗಡಿಸಬಹುದು ಎಂದು ನಾನು ಅಂದುಕೊಳ್ಳುತ್ತೇನೆ. ಈ ಎಡ ಬಲಕ್ಕೆ ಉದಾಹರಣೆಯಾಗಿ ನಾನು ಇಬ್ಬರು ವ್ಯಕ್ತಿಗಳನ್ನು ಸೂಚಿಸಬಯಸುತ್ತೇನೆ. ಒಬ್ಬರು ರಾಜ್ಯಮಟ್ಟದಲ್ಲಿ ಹೆಚ್ಚು ಸಕ್ರಿಯವಾಗಿದ್ದ ಎಚ್ ಎಸ್ ದೊರೆಸ್ವಾಮಿಯವರು. ಮತ್ತೊಬ್ಬರು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುವ ಅಣ್ಣಾ ಹಜಾರೆಯವರು.…
ಸಂಘ ಪರಿವಾರದ ಅಂಗಸಂಸ್ಥೆಯೇ ಆಗಿರುವ ‘ಮುಸ್ಲಿಂ ರಾಷ್ಟ್ರೀಯ ಮಂಚ್’ನ ಕಾರ್ಯಕ್ರಮದಲ್ಲಿ ಮುಸ್ಲಿಮರಿಗೆ ಸಿಹಿ ಅನಿಸುವಂತಹ ಮಾತನ್ನಾಡುವಾಗಲೂ ಮೋಹನ ಭಾಗವತರು ಮುಸ್ಲಿಮರ ‘ಹಿಂದೂಕರಣ’ದ ಅಜೆಂಡಾವನ್ನೇ ಗುಪ್ತವಾಗಿ ನುಡಿಯುತ್ತಿದ್ದಾರೆನಿಸುತ್ತದೆ. ಮೋಹನ ಭಾಗವತ್ ಅವರ ಮಾತಿಗೆ ವಿಶೇಷ ಮಹತ್ವ ಬಂದಿರುವುದು ವಿನಾಕಾರಣವೇನಲ್ಲ. ಎರಡು ದಶಕಗಳಿಂದ ಸಂಘ ಪರಿವಾರದ ಪಾತ್ರ ವಿಶೇಷವಾಗಿ ವ್ಯಾಪಿಸಿದೆ, ಬಲಗೊಂಡಿದೆ. ಹಾಗಾಗಿ ಅವರು ಏನನ್ನಾದರೂ ಹೇಳಿದರೆ ಆ…